ಬಾಲ ಸಭೆ ಉದ್ಘಾಟನೆ

ತಾರೀಕು 10-07-2015 ರಂದು ನಮ್ಮ ಶಾಲೆಯಲ್ಲಿ 2015-16 ನೇ ಸಾಲಿನ ಕಿರಿಯ ಪ್ರಾಥಮಿಕ ಮಟ್ಟದ ಬಾಲ ಸಭೆಯನ್ನು  ದಿ. ರಾಮಕೃಷ್ಣ ರಾವ್ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಶಾಲಾ ಮುಖ್ಯೋಪಾಧ್ಯಾರಾದ ಜಯರಾಮ್. ಡಿ ಉದ್ಘಾಟಿಸಿದರು.ಸಭೆಯಲ್ಲಿ ಹಿರಿಯ ಅಧ್ಯಾಪಕರಾದ ದಾಮೋದರ್ ಮಾಸ್ತರ್, ಅನುರಾಧ.ಎಂ.ಕೆ ಹಾಗೂ ಎಲ್.ಪಿ ವಿಭಾಗದ ಎಸ್.ಆರ್. ಜಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಮನ ಕಾರ್ಯಕ್ರಮ ನಿರೂಪಿಸಿ, ಫಾತಿಮತ್ ಶೀಮ ಸ್ವಾಗತಿಸಿ, ಫಾತಿಮ ಮುನೀರ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಜರಗಿದವು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಹಮ್ಮದ್ ಶಾಹಿದ್ ಮತ್ತು ಅನುಜ್ಞಾಲಕ್ಷ್ಮಿ.ಪಿ ನಿರೂಪಿಸಿದರು.






Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU