ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಕಿರಿಯ ಪ್ರಾಥಮಿಕ ಮಟ್ಟದ ಬಾಲಸಭೆಯ ಉದ್ಘಾಟನಾ ಕಾರ್ಯಕ್ರಮ ಶ್ರೀ ಯಂ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅರವಿಂದಾಕ್ಷ ಭಂಡಾರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.ಕಾರ್ಯಕ್ರಮಕ್ಕೆ ಶಾಲಾ ಹಿರಿಯ ಅಧ್ಯಾಪಕರಾದ ನಾರಾಯಣ.ಯು,ಹಿರಿಯ ಅಧ್ಯಾಪಿಕೆ ಪದ್ಮಾವತಿ.ಎಂ, ಯು.ಪಿ ಎಸ್.ಆರ್.ಜಿ ಕನ್ವಿನರ್ ರಜನಿ.ಸಿ.ಕೆ ಹಾಗೂ ಎಲ್.ಪಿ ಎಸ್.ಆರ್.ಜಿ ಕನ್ವಿನರ್ ಪ್ರತಿಭಾಶ್ರೀ.ಕೆ ಶುಭ ಹಾರೈಸಿದರು. ಸಭಾ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿ ಸುಚಿತ್ರ ಸ್ವಾಗತಿಸಿ,ಗಹನ್ ವಂದಿಸಿದರು.ವಿದ್ಯಾರ್ಥಿನಿಗಳಾದ ಸಿಝ್ಮಾ ,ವೀಕ್ಷಾ ಹಾಗೂ ಹರ್ಪಿತಾ ನಿರೂಪಿಸಿದರು. ನಂತರ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದವು.ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಭಿರಾಮ್,ರಿಷಿಕ್ ಶೆಟ್ಟಿ, ಕದೀಜತ್ ಅಫ್ನಾ, ಹಿಬ ಫಾತಿಮ,ದೈವಿಕ್ ಯಲ್ ಎನ್ ನಿರೂಪಿಸಿದರು.