ಬಾಲಸಭೆ ಕಾರ್ಯಕ್ರಮ

ವಿದ್ಯಾವರ್ಧಕ ಎ.ಯು.ಪಿ ಶಾಲೆ ಮೀಯಪದವಿನಲ್ಲಿ ಬಾಲಸಭೆ ಕಾರ್ಯಕ್ರಮವು ರಾಮಕೃಷ್ಣ ರಾವ್ ಸಭಾಂಗಣದಲ್ಲಿ  ಬಹಳ ವಿಜೃಂಬಣೆಯಿಂದ ಜರಗಿತು.ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ವಿದ್ಯಾರ್ಥಿನಿ ಆದ್ಯಶ್ರೀ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಅಧ್ಯಾಪಕಿ ನಳಿನಿ.ಎ,ಶಾಲಾ ಯು.ಪಿ ಎಸ್.ಆರ್.ಜಿ ಮಹಾಬಲೇಶ್ವರ ಭಟ್,ಶಾಲಾ ಎಲ್.ಪಿ ಎಸ್.ಆರ್.ಜಿ ಶುಭಾ.ಪಿ ಉಪಸ್ಥಿತರಿದ್ದರು.ನಂತರ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೆರಿದವು. ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿನಿ ಸಾಮಿತ್ಯಾ ಸ್ವಾಗತಿಸಿ,ವಿದ್ಯಾರ್ಥಿನಿ ಸ್ತುತಿ ಧನ್ಯವಾದವಿತ್ತರು.ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳಾದ ಶ್ರೀ ಆದ್ಯ,ಅಯೀಶತ್ ಸಫ್ವಾನ ನಿರೂಪಿಸಿದರು.




Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU