2020-21 ನೇ ಸಾಲಿನಲ್ಲಿ ನಿವೃತ್ತಿಗೊಳ್ಳುತ್ತಿರುವ ಅಧ್ಯಾಪಕರಿಗೆ ವಿದಾಯಕೂಟ

 2020-21 ಸಾಲಿನಲ್ಲಿ ನಮ್ಮ ಶಾಲೆಯಿಂದ ನಿವೃತ್ತಿಗೊಳ್ಳುತ್ತಿರುವ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಹಾಗೂ ಅಧ್ಯಾಪಿಕೆ ರತ್ನಾವತಿ.ಎ ಇವರಿಗೆ ವಿದಾಯಕೂಟ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿಟಿಎ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಶ್ರೀ ವಾಣಿವಿಜಯ ಪ್ರೌಢ ಪ್ರಾಥಮಿಕ ಶಾಲೆಯ ಸಂಚಾಲಕಿ ಅನುಸೂಯ ಟೀಚರ್ ಆಗಮಿಸಿ ಶುಭ ಹಾರೈಸಿದರು.ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್.ರಾವ್ ಆರ್.ಎಂ,ಶಾಲಾ ಸಂಚಾಲಕಿ ರಾಜೇಶ್ವರಿ.ಎಸ್.ರಾವ್ ,ಶಾಲಾ ಎಂ.ಪಿಟಿಎ ಅಧ್ಯಕ್ಷೆ ಕೈರುನ್ನಿಸ,ಶಾಲಾ ಅಧ್ಯಾಪಕರಾದ ಬಾಲಕೃಷ್ಣ.ಎಂ,ಮಹಾಭಲೇಶ್ವರ ಭಟ್ ,ನಾರಾಯಣ.ಯು ಹಾಗೂ ಸೌಮ್ಯ.ಯು ನಿವೃತ್ತರಿಗೆ ಶುಭ ಹಾರೈಸಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ,ಅಧ್ಯಾಪಿಕೆ ಪದ್ಮಾವತಿ.ಎಂ ವಂದಿಸಿದರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕ ವಿಘ್ನೇಶ್.ಎಸ್ ನಿರೂಪಿಸಿದರು.








Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU