ವಾಚನ ಮಾಸಾಚರಣೆ ಹಾಗೂ ಶಾಲಾ ಗ್ರಂಥಾಲಯದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ
ವಾಚನ ಮಾಸಾಚರಣೆ ಹಾಗೂ ಶಾಲಾ ಗ್ರಂಥಾಲಯದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮಕ್ಕೆ ನಿವೃತ್ತ ಅಧ್ಯಾಪಕರು ,ಕಲಾವಿದರಾದ ಶ್ರೀಯುತ ಶೇಖರ್ ಶೆಟ್ಟಿ ಬಾಯರು ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಹೊಸದಿಗಂತ ವಾರ್ತಾ ಪತ್ರಿಕೆ ಯನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್.ಎಂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲಾ ಅಧ್ಯಾಪಕರಾದ ಬಾಲಕೃಷ್ಣ. ಎಂ ವಿದ್ಯಾರ್ಥಿಗಳಿಗೆ ವಾಚನ ದಿನದ ಮಹತ್ವವನ್ನು ತಿಳಿಸಿದರು.ಎಲ್ಲಾ ವಿದ್ಯಾರ್ಥಿಗಳು ವಾಚನ ದಿನದ ಪ್ರತಿಜ್ಞೆ ಕೈಗೊಂಡರು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ,ಶಾಲಾ ಗ್ರಂಥಾಲಯ ಕನ್ವಿನರ್ ಸುನಿಲ್ ಕುಮಾರ್ ವಂದಿಸಿದರು.ಅಧ್ಯಾಪಕರಾದ ಅಶೋಕ್ ಕುಮಾರ್.ಡಿ ಕಾರ್ಯಕ್ರಮ ನಿರೂಪಿಸಿದರು.
Comments
Post a Comment