*ವಿದ್ಯಾವರ್ದಕ ಎಯುಪಿ ಶಾಲಾ ರಕ್ಷಕ ಶಿಕ್ಷಕ ಸಭೆ*
ವಿದ್ಯಾವರ್ಧಕ ಎಯುಪಿ ಶಾಲೆ ಮಿಯಪದವು ಇದರ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಮಹಾಸಭೆಯು ತಾರೀಕು 15 ಜುಲೈ ಶನಿವಾರದಂದು ಬೆಳಗ್ಗೆ ಶಾಲೆಯ ದಿ.ರಾಮಕೃಷ್ಣ ರಾವ್ ಸಭಾಭವನದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಳೆದ ಸಾಲಿನ ಪಿಟಿಎ ಅಧ್ಯಕ್ಷರಾಗಿದ್ದ ಶ್ರೀ ಕೃಷ್ಣಪ್ರಸಾದ್ ವಹಿಸಿದ್ದು, ಎಮ್ ಪಿಟಿಎ ಅಧ್ಯಕ್ಷೆಯಾಗಿದ್ದ ಶ್ರೀಮತಿ ಸೌಮ್ಯಾ ಪ್ರಕಾಶ್ ಮತ್ತು ಶಾಲಾ ಆಡಳಿತ ಸಲಹೆಗಾರರಾದ ಶ್ರೀ ಶ್ರೀಧರ ರಾವ್ ಆರ್ ಎಮ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಶೇಷವಾಗಿ ಆಹ್ವಾನಿಸಲ್ಪಟ್ಟ ಅತಿಥಿ ಜನಮೈತ್ರಿ ಪೋಲೀಸ್ ಶ್ರೀ ಮಧುಸೂಧನ್ ಅವರು ರಕ್ಷಕರಿಗೆ ಜಾಗೃತಿ ಹಾಗೂ ಮಾಹಿತಿ ತರಗತಿಯನ್ನು ನಡೆಸಿಕೊಟ್ಟರು.ಪೊಲೀಸ್ ಅನೂಪ್ ಉಪಸ್ಥಿತರಿದ್ದರು.2023-24 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.ನೂತನ ಅಧಕ್ಷರಾಗಿ ಹಮೀದ್ ಮೀಯಪದವು,ಉಪಾಧ್ಯಕ್ಷರಾಗಿ ಭಾಸ್ಕರ ಬೆಜ್ಜ ಹಾಗೂ ಗೋಪಾಲಕೃಷ್ಣ ,ಎಂ.ಪಿ.ಟಿ.ಎ ಅಧ್ಯಕ್ಷೆಯಾಗಿ ಸ್ವಪ್ನ ಭಟ್ ಹಾಗೂ ದುರ್ಗಾಂಬಿಕ ಆಯ್ಕೆಗೊಂಡರು. ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅರವಿಂದಾಕ್ಷ ಭಂಡಾರಿಯವರು ಪ್ರಾಸ್ತಾವಿಕಹೇಳುವುದರ ಜೊತೆಗೆ ಸ್ವಾಗತಿಸಿ,ಅಧ್ಯಾಪಿಕೆ ಶ್ರೀಮತಿ ರಾಧಾಮಣಿ ಟೀಚರ್ ಧನ್ಯವಾದ ಸಮರ್ಪಿಸಿದರು.ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಕಾರ್ಯಕ್ರಮ ನಿರೂಪಿಸಿದರು.
Comments
Post a Comment