📘📚ವಾಚನಾ ಮಾಸಾಚರಣೆಯ ಸಮಾರೋಪ ಸಮಾರಂಭ📘📚
ನಮ್ಮ ಶಾಲೆಯಲ್ಲಿ ದಿನಾಂಕ 19.07.2023 ನೇ ಬುಧವಾರ ವಾಚನಾ ಮಾಸಾಚರಣೆಯ ಸಮಾರೋಪ ಸಮಾರಂಭ ಶಾಲಾ ಸಭಾಭವನದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಎಸ್.ವಿ.ವಿ ಎಚ್.ಎಸ್.ಎಸ್ ಶಾಲಾ ಕನ್ನಡ ಪ್ರಾಧ್ಯಾಪಿಕೆ ಸಾವಿತ್ರಿ ಟೀಚರ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.ಶಾಲಾ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ,ಶಾಲಾ ಗ್ರಂಥಾಲಯದ ಸಂಚಾಲಕರಾದ ಸುನಿಲ್ ಕುಮಾರ್ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಮಕ್ಕಳು ಬರೆದ ಸೃಜನಾತ್ಮಕ ಪುಸ್ತಕ 'ಅರಳು ಮಲ್ಲಿಗೆ'ಯನ್ನು ಬಿಡುಗಡೆಗೊಳಿಸಲಾಯಿತು.ನಂತರ ವಾಚನಾ ಮಾಸಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕ ಅಶೋಕ್ ಕುಮಾರ್. ಡಿ ಸ್ವಾಗತಿಸಿ,ನಿರೂಪಿಸಿದರು.ಅಧ್ಯಾಪಕ ಸುನಿಲ್ ಕುಮಾರ್ ವಂದಿಸಿದರು.
Comments
Post a Comment